ರಾಜಸ್ಥಾನ: ಭರತ್ಪುರ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸ್ವಂತ ಸಹೋದರನ ಮೇಲೆಯೇ ಹಲವು ಬಾರಿ ಟ್ರ್ಯಾಕ್ಟರ್ ಹರಿಸಿದ ಬರ್ಬರ ಘಟನೆ ನಡೆದಿದೆ. ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಕೃತ್ಯವನ್ನು ಚಿತ್ರೀಕರಿಸಿದ್ದಾರೆ.
ಟ್ರ್ಯಾಕ್ಟರ್ಗೆ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ನಿರ್ಪತ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಆತನ ಸಹೋದರ ದಾಮೋದರ್ ಗುರ್ಜಾರ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಮೂರು ದಿನಗಳ ಹಿಂದೆಯೂ ಜಗಳವಾಗಿತ್ತು, ಇಂದು ಅವರ ನಡುವೆ ಮತ್ತೆ ಜಗಳವಾಗಿದೆ. ಸಹೋದರ ಟ್ರ್ಯಾಕ್ಟರ್ ಹರಿಸಿ ನಿರ್ಪತ್ನನ್ನು ಕೊಂದಿದ್ದಾನೆ ಎಂದು ಭರತ್ಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ.
ನಿರ್ಪತ್ ಮತ್ತು ದಾಮೋದರ್ ನಡುವೆ ದೀರ್ಘ ಕಾಲದಿಂದ ಜಮೀನು ವಿವಾದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈವರೆಗೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರನ್ನು ಹಿಡಿಯಲು ಬಲೆ ಬೀಸಿದ್ದಾರೆ.
- ಅಬಕಾರಿ ಅಧಿಕಾರಿಗಳಿಂದ ಅನ್ಯರಾಜ್ಯದ ಕಾರ್ಮಿಕರ ದರೋಡೆ – ನಾಲ್ವರ ಬಂಧನ
- ದ್ವಿಚಕ್ರ ವಾಹನ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು
- ಕೋರ್ಟ್ ಆವರಣದಲ್ಲಿಯೇ ವಕೀಲೆಗೆ ಹಲ್ಲೆಗೈದ ಹಿರಿಯ ವಕೀಲ – ದೂರು ದಾಖಲು
- ವಿಧವೆ ಜೊತೆ ಮೂರು ಮಕ್ಕಳ ತಂದೆಯ ಅನೈತಿಕ ಸಂಬಂಧ – ಹೆಣ್ಣು ಮಗುವನ್ನು ರಿಕ್ಷಾದಲ್ಲಿರಿಸಿ ಎಸ್ಕೇಪ್ ಆದ ಜೋಡಿಯ ಬಂಧನ
- ಪುತ್ತೂರು: ಡಾ. ಗಣೇಶ್ ಪ್ರಸಾದ್ ಮುದ್ರಾಜೆ ವಿರುದ್ಧ ಧರ್ಮಾಧಾರಿತ ಅವಮಾನಕರ ಹೇಳಿಕೆ ಕೊಟ್ಟ ಆರೋಪ; ಮುನೀರ್ ಕಾಟಿಪಳ್ಳ ವಿರುದ್ಧ ಕಠಿಣ ಕ್ರಮಕ್ಕೆ IMA ಆಗ್ರಹ
- ಮಂಗಳೂರು: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್ ಸಿಂಧೂರ್’ ಎಂದು ಸ್ಟೋರಿ ಹಾಕಿದ ರೇಷ್ಮಾ.! ಭಾರೀ ವಿರೋಧದ ಬಳಿಕ ಹೀಗುತ್ತು ಸಮರ್ಥನೆ
- ಉಡುಪಿ: ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ ಬೋಲ್..’ ದೇಶ ವಿರೋಧಿ ಗೋಡೆ ಬರಹ
- ದಕ್ಷಿಣ ಕನ್ನಡ: ಯುವಕ ಭೀಕರ ಹತ್ಯೆ – ಕೊಲೆಯ ಸುತ್ತ ಹಲವು ಅನುಮಾನ