ತಿರುವನಂತಪುರ: ಯುವ ವಕೀಲೆಗೆ ಹಿರಿಯ ವಕೀಲರೊಬ್ಬರು ನ್ಯಾಯಾಲಯದ ಆವರಣದಲ್ಲಿ ಥಳಿಸಿದ ಘಟನೆ ನಡೆದಿದೆ.
ಕೇರಳದ ವಂಚಿಯೂರ್ ನ್ಯಾಯಾಲಯದಲ್ಲಿ ಹಿರಿಯ ವಕೀಲರೊಬ್ಬರು ಕಿರಿಯ ವಕೀಲರ ಮೇಲೆ ಥಳಿಸಿದ್ದಾರೆ. ಈ ಘಟನೆ ಇಂದು ಮಧ್ಯಾಹ್ನ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಹಿರಿಯ ವಕೀಲ ಬೈಲಿನ್ ದಾಸ್ ಅವರು ಜೂನಿಯರ್ ವಕೀಲೆ ಶ್ಯಾಮಿಲಿ ಅವರನ್ನು ಮಾಪ್ ಸ್ಟಿಕ್ ಬಳಸಿ ಹೊಡೆದಿದ್ದಾಗಿ ಮಲಯಾಳಂ ಸುದ್ದಿ ವಾಹಿನಿ ಮನೋರಮಾ ವರದಿ ಪ್ರಕಟಿಸಿದೆ.
ತಿರುವನಂತಪುರ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ವಕೀಲ ಪಲ್ಲಿಚಲ್ ಎಸ್ಕೆ ಪ್ರಮೋದ್, ಬಾರ್ & ಬೆಂಚ್ ಜೊತೆ ಮಾತನಾಡಿದ ಅವರು, ದಾಸ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
“ವಕೀಲ ದಾಸ್ ನಿಂದ ಹಲ್ಲೆಗೊಳಗಾದ ಜೂನಿಯರ್ ವಕೀಲರು ಅವರ ಕಚೇರಿಯಲ್ಲಿ ಅವರ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಚೇರಿಗೆ ಸಂಬಂಧಿಸಿದ ವಿಷಯದ ಕುರಿತು ಚರ್ಚೆಯ ಸಮಯದಲ್ಲಿ, ವಕೀಲ ದಾಸ್ ಕೋಪಗೊಂಡು ಮಹಿಳಾ ವಕೀಲರ ಮುಖಕ್ಕೆ ಹೊಡೆದರು. ಕಿರಿಯ ವಕೀಲೆ ಪ್ರಸ್ತುತ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.
“ಘಟನೆಯ ಸುದ್ದಿ ನಮಗೆ ತಲುಪಿದ ಕ್ಷಣದಿಂದ, ಬಾರ್ ಅಸೋಸಿಯೇಷನ್ ಅವರಿಗೆ ಅಗತ್ಯವಾದ ಬೆಂಬಲ ಮತ್ತು ಸಹಾಯವನ್ನು ನೀಡುತ್ತಿದೆ. ವಕೀಲ ದಾಸ್ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವ್ಯವಸ್ಥಾಪಕ ಸಮಿತಿಯ ಸಭೆಯ ನಂತರ, ಬಾರ್ ಅಸೋಸಿಯೇಷನ್ ಅವರ ಸದಸ್ಯತ್ವವನ್ನು ತಕ್ಷಣವೇ ಅಮಾನತುಗೊಳಿಸಿದೆ” ಎಂದು ಪ್ರಮೋದ್ ಹೇಳಿದರು.
ಮುಖಕ್ಕೆ ಗಂಭೀರ ಗಾಯಗಳಾಗಿದ್ದ ಶ್ಯಾಮಿಲಿಯನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಶ್ಯಾಮಿಲಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.