ಬೆಂಗಳೂರಿನಲ್ಲಿ ನೀರಿನ ಬವಣೆ ಎದ್ದಿದೆ. ಈ ಬಾರೀ ಕರ್ನಾಟಕದಲ್ಲಿ ಸಾಕಷ್ಟು ಮಳೆಯಾಗದ ಹಿನ್ನಲೆ ನೀರಿನ ತಾತ್ವಾರ ಬಿಸಿಮುಟ್ಟಿದೆ. ಈ ನಡುವೆ ಸಿದ್ಧರಾಮಯ್ಯ ಸರ್ಕಾರಕ್ಕೆ ಬಾಲಿವುಡ್ ತಾರೆ, ನೀಲಿ ಚಿತ್ರ ತಾರೆ ಕೋಟಿ ಹಣ ಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನೀರಿನ ತೊಂದರೆಯಿಂದಾಗಿ ಕರ್ನಾಟಕ ಸರ್ಕಾರಕ್ಕೆ ಸನ್ನಿ ಲಿಯೋನ್ ಬರೋಬ್ಬರಿ 19 ಕೋಟಿ ಕೊಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವೊಂದು ಪೇಜ್ಗಳು ಸನ್ನಿ ಲಿಯೋನ್ ಹಣ ಕೊಟ್ಟಿದ್ದಾಗಿ ಮಾಹಿತಿ ನೀಡಿದೆ. ಆದರೆ ಅಧೀಕೃತವಾಗಿ ಈ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗಿಲ್ಲ.

ಈ ಪೊಸ್ಟ್ ಬಗ್ಗೆ ಕೆಲವುರು ಹೊಗಳಿದ್ದರೆ ಕೆಲವರು ಇದೊಂದು ಸುಳ್ಳು ಸುದ್ದಿ ಲ, ಪ್ರೂಫ್ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.