ಶಿರಸಿ: ಅಳಿಯನಿಗೆ ಮಾರಕಾಸ್ತ್ರದಿಂದ ಹೊಡೆದು ಮಾವನೇ ಕೊಲೆ ಮಾಡಿದ ಘಟನೆ ಮಳಲಿಯಲ್ಲಿ ನಡೆದಿದೆ. ತನ್ನ ಹೆಂಡತಿಯ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಾವನ ಹತ್ತಿರ ಅಳಿಯ ಪದೆ ಪದೇ ಜಗಳ ತೆಗೆಯುತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮಾವ ಸಹನೆ ಕಳೆದುಕೊಂಡು ಅಳಿಯನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


ಮಾವನ ಹತ್ತಿರ ಅಳಿಯ ಜಗಳ ತೆಗೆದಿದ್ದು, ಸಿಟ್ಟಿನಿಂದ ಬಡಿಗೆಯಿಂದ ಅಳಿಯನಿಗೆ ಹೊಡೆದು ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಕೊಲೆ ಮಾಡಿದ ಆರೋಪಿ ವೆಂಕಟರಮಣ ಗೌಡ ಹಾಗು ಕೊಲೆಯಾದ ವ್ಯಕ್ತಿ ಮಂಜು ಗೌಡ. ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.