Sunday, May 18, 2025

ಬೆಳ್ತಂಗಡಿ: ಪುರುಷ ಕಟ್ಟುನ ಆಚರಣೆಯಲ್ಲಿ ಮುಸ್ಲಿಮರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದೂರು

ಬೆಳ್ತಂಗಡಿ: ಪುರುಷ ಕಟ್ಟುನ ಎಂಬ ಆಚರಣೆಯ ಹೆಸರಿನಲ್ಲಿ ಮುಸ್ಲಿಮರ ವೇಷ ಧರಿಸಿ ಇಸ್ಲಾಂ ಧರ್ಮ, ಪ್ರವಾದಿ ಮೊಹಮ್ಮದ್ ಮತ್ತು ಆಝಾನ್ ಅನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ 17 ಮಂದಿ ವಿರುದ್ಧ ವೇಣೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ಪೆರಾಡಿ ಗ್ರಾಮದ ಪರಿಸರದಲ್ಲಿ ನಡೆದಿದೆ.

ಎ.14 ರಂದು ರಾತ್ರಿಯ ಅವಧಿಯಲ್ಲಿ ಪುರುಷರ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ವಸ್ತ್ರ ಧರಿಸಿ ಅವಹೇಳನ ಮಾಡಿದ್ದಾರೆ. ಮಾತ್ರವಲ್ಲದೆ ಇದನ್ನು ಹಿಂದೂ-ಮುಸ್ಲಿಂ ಧರ್ಮಗಳ ಮಧ್ಯೆ ವೈಷಮ್ಯದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಮಹಮ್ಮದ್ ರಫೀಕ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಅದರಂತೆ ಆರೋಪಿರತಾದ ವಸಂತ, ರಾಜೇಶ್ ಸಾವ್ಯ, ಹರೀಶ್ ಸಾವ್ಯ, ದಯಾನಂದ ಪೆರಾಡಿ, ರಂಗನಾಥ ಪೆರಾಡಿ, ಮೋಹನ್‌ ಪೆರಾಡಿ, ಶಮಿತ್ ಪೆರಾಡಿ, ರವಿ ಪೆರಾಡಿ, ರಮೇಶ್ ಕುಲಾಲ್ ಪೆರಾಡಿ, ಪ್ರಕಾಶ್ ಪೆರಾಡಿ ಸೇರಿದಂತೆ 17 ಮಂದಿಯ ಹೆಸರು ನೀಡಿದ್ದು ಉಳಿದ ಇತರ 20-30 ಜನರು ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Related Articles

Latest Articles