Saturday, May 24, 2025

‘ನನ್ನ ಮದುವೆಗೆ ದರ್ಶನ್ ರಿಲೀಸ್‌ ಆಗಿ ಬರ್ತಾರೆ’- ದರ್ಶನ್‌ನನ್ನು ಭೇಟಿಯಾದ ತರುಣ್ ಸುಧೀರ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್ ಗ್ಯಾಂಗ್​ ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ನಟ ದರ್ಶನ್ ಅವರನ್ನು ನೋಡಲು ಕುಟುಂಬಸ್ಥರು, ಸ್ನೇಹಿತರು ಪರಪ್ಪನ ಅಗ್ರಹಾರಕ್ಕೆ ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ.

ಇಂದು ನಟ ದರ್ಶನ್ ಅವರನ್ನು ಭೇಟಿ ಮಾಡಲು ಕಾಟೇರ ನಿರ್ದೇಶಕ ತರುಣ್ ಸುಧೀರ್‌‌, ದರ್ಶನ್ ಪುಟ್ಟಣ್ಣಯ್ಯ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ದರ್ಶನ್​ರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತರುಣ್ ಸುಧೀರ್‌‌ ಅವರು ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಮಾತಾಡಿದ ಅವರು, ನಟ ದರ್ಶನ್​ ಅವರಿಗೆ ಹುಷಾರು ಇರಲಿಲ್ಲ. ಈಗ ಚೆನ್ನಾಗಿದ್ದಾರೆ. ಸಂಜೆ ವೇಳೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ಈಗಿನ ವಾತಾವರಣದಿಂದ ಜ್ವರ ಬಂದಿತ್ತು. ಯಾವಾಗಲೂ ನನ್ನನ್ನು ಯಾವ ರೀತಿ ನೋಡಿ ರಿಯಾಕ್ಟ್ ಮಾಡುತ್ತಿದ್ದರೋ, ಅದೇ ರೀತಿ ಇಂದು ರಿಯಾಕ್ಟ್ ಮಾಡಿದ್ರು. ಅವರಿಗಿಂತ ನಾವು ಮಾನಸಿಕವಾಗಿ ವೀಕ್ ಆಗಿಬಿಟ್ಟಿದ್ದೇವೆ. ನಟ ದರ್ಶನ್ ಹೆಲ್ತ್ ಬಗ್ಗೆ ಹೆಚ್ಚು ಚರ್ಚೆ ಆಯ್ತು. ಏನಿಲ್ಲ ಮಗನೇ ಆರಾಮವಾಗಿ ಇದ್ದೇನೆ. ಸ್ವಲ್ಪ ಜ್ವರ ಇತ್ತು ಅಷ್ಟೇ ಎಂದು ಹೇಳಿದ್ದಾರೆ.

ನನ್ನ ಮದುವೆ ವಿಚಾರ ಮೊದಲೇ ದರ್ಶನ್​ ಅವರಿಗೆ ಗೊತ್ತಿತ್ತು. ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ಇತ್ತು. ಆದ್ರೆ ನಿಗದಿತ ದಿನಾಂಕದಂದು ಮಗುವೆ ಆಗು ಅಂತ ಹೇಳಿದ್ದಾರೆ. ಅಷ್ಟೊತ್ತಿಗೆ ನಾನು ಬರ್ತಿನಿ ಅಂದ್ರು. ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ನಾವೆಲ್ಲಾ ಇದ್ದೇವೆ ಎಂದಿದ್ದಾರೆ.

Related Articles

Latest Articles