Sunday, May 18, 2025

ಈ ಪಟ್ಟಣಕ್ಕೆ ಏನಾಗುತ್ತಿದೆ.! ಪುಣೆಯಲ್ಲಿ ಮತ್ತಾದೇ ರೀತಿಯ ಅಪಘಾತಗಳು – ಕುಡಿತದಿಂದಲೇ ದುರಂತ

ಪುಣೆಯಲ್ಲಿ ಕುಡಿದ ಅಮಲಿನಲ್ಲಿ ಅಪ್ರಾಪ್ತ ತನ್ನ ಪೋರ್ಷೆ ಕಾರಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳನ್ನು ಕೊಂದಿದ್ದ. ಇದಾದ ಬಳಿಕ ಶಿವಸೇನಾ ನಾಯಕನ ಮಗ ತನ್ನ BMW ಅನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರನ್ನು ಕೊಂದ ನಂತರ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.

ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಬಂದು ಟೆಂಪೋ ಟ್ರಕ್‌ಗೆ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಘಟನೆ ಪುಣೆಯಲ್ಲಿ ನಡೆದಿದೆ.‌ ಮಂಜರಿ ಮುಂಡ್ವಾ ರಸ್ತೆಯಲ್ಲಿ ಅಪಘಾತ ಸಂಭವಿದೆ. ಎಸ್‌ಯುವಿ ಕಾರನ್ನು ಸೌರಭ್ ಗಾಯಕ್ವಾಡ್ ಎಂಬಾತ ಚಲಾಯಿಸುತ್ತಿದ್ದನಂತೆ. ಸೌರಭ್ ಗಾಯಕ್ವಾಡ್ ಅವರು ಮಾಜಿ ಕಾರ್ಪೊರೇಟ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯ ನಾಯಕ ಬಂಡು ಗಾಯಕ್ವಾಡ್ ಅವರ ಮಗನಾಗಿದ್ದಾನೆ.

ಸೌರಭ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಸೌರಭ್ ಗಾಯಕ್ವಾಡ್ ಕುಡಿದು ವಾಹನ ಚಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದ ಅಮಲಿನಲ್ಲಿ ಸೌರಭ್ ಗಾಯಕ್ವಾಡ್ ಎಸ್‌ಯುವಿ ಕಾರನ್ನು ವೇಗವಾಗಿ ಚಲಿಸುತ್ತಿದ್ದ. ಇದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕೋಳಿಗಳನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದಾರೆ.

ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://twitter.com/imvivekgupta/status/1813570501731840131?t=w9Ht1jPfbZtLnBWnWwEg1g&s=19

Related Articles

Latest Articles