Saturday, June 28, 2025

ನಾಗಮಂಗಲ ಗಲಭೆ: ನಿಷ್ಪಕ್ಷಪಾತ ತನಿಖೆ ನಡೆಸಲು ಮುಸ್ಲಿಂ ಮುಖಂಡ ಆಗ್ರಹ

ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಗಣೇಶ ಚೌತಿಯ ಮೆರವಣಿಗೆಯಂದು ನಡೆದಿದ್ದ ಗಲಭೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಮಂಡ್ಯದ ಮುಸ್ಲಿಂ ಮುಖಂಡರು ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ ಸಿಪಿಐ ನಿರಂಜನ್ ಅವರಿಗೆ ಮನವಿ ಮಾಡಿದ್ದಾರೆ.

ಹಾನಿಗೊಳಗಾದ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರ ಅಳಲನ್ನು ಕೇಳಿ ಬಂದಿದ್ದೇವೆ. ಗಲಭೆಯಿಂದ ಅಪಾರ ಹಾನಿಯಾಗಿದೆ. ಹೀಗಾಗಿ ನ್ಯಾಯಪರವಾಗಿ ತನಿಖೆ ನಡೆಸಬೇಕು’ ಎಂದು ಮುಖಂಡರಾದ ಮಕಸೂದ್, ಮುಫ್ತಿ ಇಫ್ತಿಹಾ‌ರ್, ಮೌಲಾನಾ ಕೋರಿದರು.

ಅದಕ್ಕೂ ಮುನ್ನ, ಪಟ್ಟಣದ ಮಂಡ್ಯ ರಸ್ತೆ, ಮೈಸೂರು ರಸ್ತೆಯಲ್ಲಿ ಹಾನಿಗೊಳಗಾಗಿದ್ದ ಬಟ್ಟೆ, ಹಣ್ಣು ಹಾಗೂ ಪಾತ್ರೆ ಅಂಗಡಿ ಸೇರಿದಂತೆ ಹಿಂದೂ ಮತ್ತು ಮುಸ್ಲಿಮರ ಪ್ರತಿ ಅಂಗಡಿಗೂ ಭೇಟಿ ನೀಡಿ ಸಾಂತ್ವನ ಹೇಳಿದರು.

ನಷ್ಟದ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು, ಅಧಿಕಾರಿಗಳ ಮಟ್ಟದಲ್ಲಿ ಸಿಗಬಹುದಾದ ಪರಿಹಾರವನ್ನು ಕೊಡಿಸುವ ಪ್ರಯತ್ನವನ್ನೂ ಮಾಡಲಾಗುವುದು’ ಎಂದು ಅಂಗಡಿಗಳ ಮಾಲೀಕರಿಗೆ ಭರವಸೆ ನೀಡಿದ್ದಾರೆ.

ಪಟ್ಟಣದ ಹನೀಫ್ ಮಸೀದಿ ಸೇರಿದಂತೆ ವಿವಿಧ ಸ್ಥಳಗಳಿಗೂ ಭೇಟಿ ನೀಡಿದರು. ನಂತರ, ಸಮುದಾಯದ ಸ್ಥಳೀಯ ಮುಖಂಡರೊಂದಿಗೂಸಭೆ ನಡೆಸಿದರು. ಮುಖಂಡರಾದ ಇಮ್ರಾನ್, ಮಸೂದ್, ಮುಪ್ಪಿ ರಿಜ್ವಾನ್, ಖಾಸಿಂ, ಮೌಲಾನಾ ಆಸೀಫ್, ಅತೀಕ್ ಪಾಷ, ಇಲಿಯಾಸ್ ಪಾಷ ಇದ್ದರು.

Related Articles

Latest Articles