Friday, June 27, 2025

ಕಾಸರಗೋಡು: ಹಬ್ಬದ ದಿನದಂದೇ ಮುಸ್ಲಿಂ ಯೂತ್ ಲೀಗ್ ಮುಖಂಡನಿಗೆ ಹಲ್ಲೆ – ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು – ಎಸ್‌ಡಿಪಿಐ- ಸಿಪಿಎಂ ಕೈವಾಡದ ಆರೋಪ

ಕಾಸರಗೋಡು: ನಾಲ್ವರು ವ್ಯಕ್ತಿಗಳು ಕಾರನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೈದು ಜೀವ ಬೆದರಿಕೆ ಹಾಕಿ ಘಟನೆ ನಡೆದಿದೆ. ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಹಾಶಿಮ್ ಬಂಬ್ರಾನಿ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ. ಹಾಶಿಮ್ ಬಂಬ್ರಾನಿ ಅವರ ಪತ್ನಿ ನೀಡಿದ ದೂರಿನನ್ವಯ ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಜಾನ್‌ ಹಬ್ಬದ ದಿನವಾದ ಮಾ.31ರ ಸೋಮವಾರ ಮಧ್ಯಾಹ್ನ ಬಂಬ್ರಾಣಿ ನಗರದ ಚೆಂಗಲ್‌ನಲ್ಲಿ ಈ ಘಟನೆ ನಡೆದಿದೆ. ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಮುತ್ತತ್ತೋಡಿ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಶಿಮ್ ಬಂಬ್ರಾನಿ (36), ಅವರ ಪತ್ನಿ ಸಿ.ಎಂ. ನಫೀಸತ್ ತಸ್ನಿಯಾ (30) ಮತ್ತು ಅವರ ಮಕ್ಕಳು ಹಲ್ಲೆಗೊಳಗಾದವರು.

ಚೆಂಗಳದ ಕೊಯಪ್ಪಾಡಿಯಿಂದ ಬಂಬ್ರಾಣಿ ನಗರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ನಾಲ್ವರ ಗುಂಪೊಂದು ಕಾರನ್ನು ನಿಲ್ಲಿಸಲು ಮುಂದಾಗಿದ್ದಾರೆ. ಕಾರು ನಿಲ್ಲಿಸಿದಾಗ ಕಿಟಕಿಯನ್ನು ಕೆಳಕ್ಕೆ ಇಳಿಸಿದಾಗ ಹಾಶಿಂ ಬಂಬ್ರಾನಿ ಅವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪತ್ನಿ ನಫೀಸತ್‌ ತಸ್ನಿಯಾ ಅವರು ತಡೆಯಲು ಹೋದಾಗ, ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮತ್ತು ಇತರರು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಜನ ಸೇರುತ್ತಿದ್ದಂತೆ ಅಲ್ಲಿಂದ ತಂಡ ಪರಾರಿಯಾಗಿದೆ. ಹಾಶಿಂ ಬಂಬ್ರಾನಿ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನವಾಜ್, ಕರೀಂ, ಮೂಸಿನ್ ಮತ್ತು ಚೆಂಗಳದ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂಸಾಚಾರದ ಹಿಂದೆ ಎಸ್‌ಡಿಪಿಐ – ಸಿಪಿಎಮ್‌ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಈ ನಾಲ್ವರು ಎಸ್‌ಡಿಪಿಐ- ಸಿಪಿಎಮ್‌ ಕಾರ್ಯಕರ್ತರು ಎಂದು ಆರೋಪಿಸಿದ್ದಾಗಿ ಮಲಯಾಳಂ ಸುದ್ದಿ ವಾಹಿನಿ ಕಾಸರಗೋಡುವಾರ್ತಾ ವರದಿ ಪ್ರಕಟಿಸಿದೆ.

ನಾಲ್ಕು ವ್ಯಕ್ತಿಗಳ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗಿದೆ. ಭಾರತೀಯ ದಂಡ ಸಂಹಿತೆ 2023, 181(1). 296 B, 351(3), 74,3(5) ಅನ್ವಯ ಪ್ರಕರಣ ದಾಖಲಾಗಿದೆ.

Related Articles

Latest Articles