Friday, June 27, 2025

ಮಂಗಳೂರು: ಕೂಳೂರು ಸೇತುವೆ ಬಳಿ ಭೀಕರ ಅಪಘಾತ – ದ್ವಿಚಕ್ರ ಸಹಸವಾರೆ ಸ್ಥಳದಲ್ಲೇ ಮೃತ್ಯು.!!

ಮಂಗಳೂರು : ಕಂಟೈನರ್ ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಸಹಸವಾರೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೂಳೂರು ಸೇತುವೆ ಬಳಿ ನಡೆದಿದೆ.

ಮೃತರನ್ನು ಸುರತ್ಕಲ್ ನಿವಾಸಿ ಶಕೀಲ್ ಸುವರ್ಣ ರವರ ಪತ್ನಿ ಲಾವಣ್ಯ(27) ಎಂದು ಗುರುತಿಸಲಾಗಿದೆ.

ಪಣಂಬೂರಿಂದ ಕಾವೂರು ಕಡೆಗೆ ಸೆ.17ರ ಸಂಜೆ ಸುಮಾರು 4 ಗಂಟೆಗೆ ಪತಿ ಜೊತೆ ದ್ವಿಚಕ್ರದಲ್ಲಿಪ್ರಯಾಣಿಸುತ್ತಿರುವ ವೇಳೆ ಕೂಳೂರು ಸೇತುವೆಯಲ್ಲಿ ಅತಿ ವೇಗದಿಂದ ಬಂದ ಕಂಟೈನರ್ ಲಾರಿಯೊಂದು ಬಲಭಾಗದಿಂದ ಎಡಭಾಗಕ್ಕೆ ಏಕಾಏಕಿ ಚಲಾಹಿಸಿದ್ದು ಎಡ ಬದಿಯಲ್ಲಿ ಚಲಾಯಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಲಾರಿಯ ಹಿಂಬದಿಯ ಚಕ್ರಕ್ಕೆ ಸಹಸವರೇ ಲಾವಣ್ಯ ಸಿಲುಕಿದ್ದು ಚಕ್ರ ತಲೆಯಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತಿ ಬಲ ಬದಿಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Related Articles

Latest Articles