Friday, June 27, 2025

ಕಾಸರಗೋಡು: ಅಂಗನವಾಡಿಗೆ ಕನ್ನಡ ಶಿಕ್ಷಕಿಯನ್ನು ನೇಮಿಸುವಂತೆ ಹೈಕೋರ್ಟ್ ತೀರ್ಪು – ರಿಷಭ್ ಶೆಟ್ಟಿ ಸಿನೆಮಾವನ್ನು ನೆನಪಿದ ಘಟನೆ

ಕಾಸರಗೋಡು: ಜಿಲ್ಲೆಯ ಅಡೂರು ಬಳಿಯ ಕೋರಿಕಂಡ ಅಂಗನವಾಡಿಗೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಿಸುವಂತೆ ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

ಕನ್ನಡ ಮಾಧ್ಯಮದ ಈ ಅಂಗನವಾಡಿಗೆ ರಾಜ್ಯ ಸರ್ಕಾರ ಮಲಯಾಳ ಭಾಷೆಯ ಶಿಕ್ಷಕಿಯನ್ನು ನೇಮಿಸಿದೆ.

ಈ ಅಂಗನವಾಡಿಯ ಮಕ್ಕಳ ಪೋಷಕರು ಮತ್ತು ಅಂಗನವಾಡಿ ಮೇಲುಸ್ತುವಾರಿ ಸಮಿತಿಯವರು (ಎಎಲ್‌ಎಂಎಸ್) ಹೈಕೋರ್ಟ್‌ಗೆ 3 ಪ್ರತ್ಯೇಕ ರಿಟ್‌ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಮಲಯಾಳ ಶಿಕ್ಷಕಿಯ ನೇಮಕ ಸರಿಯಲ್ಲ; ತಕ್ಷಣವೇ ಕನ್ನಡ ಶಿಕ್ಷಕಿಯನ್ನು ನೇಮಿಸಬೇಕು ಎಂದು ಆದೇಶಿಸಿದೆ.

Related Articles

Latest Articles