Friday, June 27, 2025

ದ್ವಿಚಕ್ರ ವಾಹನ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು

ಕೊಪ್ಪ: ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದನೋರ್ವ ( Yakshagana Artist) ದಾರುಣವಾಗಿ ಮೃತಪಟ್ಟ ಘಟನೆ ಕೊಪ್ಪ ಸಮೀಪ ನಡೆದಿದೆ. ರಂಜಿತ್ ಬನ್ನಾಡಿ ( Ranjith Bannadi) ಮೃತಪಟ್ಟ ದುರ್ದೈವಿ. ಈ ಘಟನೆ‌ ಮೇ.‌13 ರ‌ ಮಂಗಳವಾರ ರಾತ್ರಿ ನಡೆದಿದೆ .

ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನ ಮಳೆಯಿಂದ ರದ್ದಾದ ಕಾರಣ ವಾಪಸ್ಸಾಗುವಾಗ ಆಗುಂಬೆ ಸಮೀಪ ವಿದ್ಯುತ್ ಕಂಬ ತಂತಿ ಮೈ ಮೇಲೆ ಬಿದ್ದಿದೆ.
ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವ ಕಲಾವಿದ ರಂಜಿತ ಬನ್ನಾಡಿ ಅವರ ಮೇಲೆ ತಂತಿ ಹರಿದು ತೀವ್ರ ಸ್ವರೂಪದ ಗಾಯಗಳಾಗಿದೆ.

ಹಿಂಬದಿ ಸವಾರ, ಕಲಾವಿದ ವಿನೋದ ರಾಜ್ ಅದೃಷ್ಟವಷಾತ್ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರ ಸಹಕಾರದಿಂದ ತುರ್ತುವಾಹನದ ಮೂಲಕ ಮಣಿಪಾಲ ಕೆ.ಎಮ್.ಸಿ ಅಸ್ಪತ್ರೆಗೆ ಸೇರಿಸುವ ಮುನ್ನವೇ ರಂಜಿತ್‌ ಬನ್ನಾಡಿ ಸಾವನ್ನಪ್ಪಿದ್ದಾರೆ.

Related Articles

Latest Articles