Friday, June 27, 2025

ಮಹಾರಾಷ್ಟ್ರದಲ್ಲಿ 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್​

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಈ ಬಾರಿ ಮಹಾ ಗದ್ದುಗೆ ಏರಲು ಕಾಂಗ್ರೆಸ್ ವಿಭಿನ್ನ ಅಸ್ತ್ರ ಪ್ರಯೋಗಿಸಿದೆ. ತಮ್ಮ ಬತ್ತಳಿಕೆಯಲ್ಲೇ ಇದ್ದ ಬಂಡಾಯ ಬಾಣಗಳನ್ನು ಮುರಿದು ಹಾಕಿದೆ. ಆ ಮೂಲಕ ಹೊಸ ಮುಖ ಹಾಗೂ ಸಕ್ರಿಯ ನಾಯಕರಿಗೆ ಮಣೆ ಹಾಕಲು‌ ಮುಂದಾಗಿದೆ‌.‌

ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯಂತೆಯೇ ಕಾಂಗ್ರೆಸ್​ ಕೂಡ ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಮಹಾರಾಷ್ಟ್ರ ಕಾಂಗ್ರೆಸ್ 28 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.

ನವೆಂಬರ್ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ 22 ವಿಧಾನಸಭಾ ಕ್ಷೇತ್ರಗಳ ಈ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಸಚಿವ ರಾಜೇಂದ್ರ ಮುಲಾಕ್ (ರಾಮ್‌ಟೆಕ್ ಕ್ಷೇತ್ರ), ಯಜ್ಞವಲ್ಕ್ ಜಿಚ್ಕರ್ (ಕಟೋಲ್), ಕಮಲ್ ವ್ಯಾವಾರೆ (ಕಸ್ಬಾ), ಮನೋಜ್ ಶಿಂಧೆ (ಕೊಪ್ರಿ ಪಚ್ಪಖಾಡಿ), ಮತ್ತು ಆಬಾ ಬಾಗುಲ್ (ಪಾರ್ವತಿ) ಸೇರಿದಂತೆ ಪ್ರಮುಖ ನಾಯಕರು ಕ್ರಮ ಎದುರಿಸಿದ್ದಾರೆ.

ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ. ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.

ಯಾರೆಲ್ಲಾ ಪಕ್ಷದಿಂದ ಕಿಕ್ ಔಟ್.?
ರಾಮ್‌ಟೆಕ್‌ನಿಂದ ಸ್ಪರ್ಧಿಸಿರುವ ಮಾಜಿ ಸಚಿವ ರಾಜೇಂದ್ರ ಮುಲಾಕ್, ಕಟೋಲ್‌ನಿಂದ ಯಜ್ಞವಾಲ್ಕ್ ಜಿಚ್ಕರ್, ಕಸ್ಬಾದಿಂದ ಕಮಲ್ ವ್ಯಾವಾರೆ, ಕೊಪ್ರಿ ಪಚ್ಪಖಾಡಿಯಿಂದ ಮನೋಜ್ ಶಿಂಧೆ ಮತ್ತು ಸುರೇಶ್ ಪಾಟೀಲ್, ಪಾರ್ವತಿಯಿಂದ ಆಬಾ ಬಾಗುಲ್ ಅಮಾನತುಗೊಂಡಿದ್ದಾರೆ.‌

ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವೆ, ಭರತ್ ಯೆರೆಮೆ, ಅಭಿಲಾಷ ಗವಟೂರೆ, ಪ್ರೇಮಸಾಗರ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವಾದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಮೋಹನರಾವ್ ದಾಂಡೇಕರ್, ಮಂಗಲ್ ವಿಲಾಸ್ ಭುಜ್ವಾಲ್, ಮನೋಜ್, ವಿಜಯ್ ಖಡ್ಸೆ, ಲಶ್ವಿನ್ ಖಾನ್, ಲಶ್ವಿನ್ ಖಾನ್ ಜಿಚ್ಕರ್, ರಾಜು ಜೋಡೆ ಮತ್ತು ರಾಜೇಂದ್ರ ಮುಕಾ ಇತರ ಅಮಾನತುಗೊಂಡ ನಾಯಕರು.

Related Articles

Latest Articles