Friday, June 27, 2025

ರೇಣುಕಾಸ್ವಾಮಿ ಕೊಲೆ ಕೇಸ್; ಪವಿತ್ರಾ ಗೌಡ ಚಾಟ್‌ ಹಿಸ್ಟರಿ ಓಪನ್ ಮಾಡಿದ ಪೊಲೀಸರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟಿ ಪವಿತ್ರಾಗೌಡಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 161 ಸ್ವ ಇಚ್ಚಾ ಹೇಳಿಕೆ ದಾಖಲಿಸುವ ಮುನ್ನಾ ಪವಿತ್ರಾ ಗೌಡಗೆ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈಯುತ್ತಿದ್ದಾರೆ. ಮೃತ ರೇಣುಕಾಸ್ವಾಮಿ ಹಾಗೂ ಪವಿತ್ರಾಗೌಡ ಪರಿಚಯದ ಬಗ್ಗೆ ತನಿಖಾಧಿಕಾರಿಗಳಿಂದ ಪ್ರಶ್ನೆ ಮಾಡುತ್ತಿದ್ದಾರೆ.

ರೇಣುಕಾಸ್ವಾಮಿ ಹೇಗೆ ನಿಮಗೆ ಪರಿಚಯ ಆಗಿದ್ದು? ಆತ ನಿಮಗೆ ಏನಂಥಾ ಚಾಟ್ ಮಾಡಿದ್ದ? ರೇಣುಕಾಸ್ವಾಮಿ ಬಗ್ಗೆ ದರ್ಶನ್​ಗೆ ಹೇಳಿದ್ಯಾರು? ರೇಣುಕಾಸ್ವಾಮಿರನ್ನು ನಿಮ್ಮ ಗಮನಕ್ಕೆ ತಂದು ಬೆಂಗಳೂರಿಗೆ ಕರಿಸಲಾಗಿತ್ತಾ? ರೇಣುಕಾಸ್ವಾಮಿಗೆ ಹಲ್ಲೆ ಮಾಡೋ ವೇಳೆ ನೀವು ಆರ್.ಆರ್.ನಗರದ ಶೆಡ್ ಬಳಿ ತೆರಳಿದ್ರಾ? ಇಷ್ಟೆಲ್ಲ ಆದ್ರು ಪೊಲೀಸರಿಗೆ ಯಾಕೆ ದೂರು ನೀಡಲಿಲ್ಲ? ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳುತ್ತಿದ್ದಾರೆ.

ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಪವಿತ್ರಾ ಗೌಡ, ರೇಣುಕಾಸ್ವಾಮಿ ನನಗೆ ಪರಿಚಯವಿಲ್ಲ. ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ. ರೇಣುಕಾಸ್ವಾಮಿ ಬಗ್ಗೆ ದರ್ಶನ್​ಗೆ ನಾನು ಹೇಳಿಲ್ಲ. ಮನೆಕೆಲಸದಾತ ಪವನ್​ರಿಗೆ ಮಾತ್ರ ಈ ವಿಚಾರ ಗೊತ್ತಾಗಿತ್ತು. ಆದರೆ ಪವನ್ ದರ್ಶನ್​ಗೆ ಹೇಳಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ ಅಂತ ಹೇಳಿಕೆ ನೀಡುತ್ತಿದ್ದಾರಂತೆ. ಸ

ದ್ಯ ಹತ್ತಾರು ಆಯಾಮಗಳಲ್ಲಿ ಪವಿತ್ರಾ ಗೌಡಳಿಗೆ ಪೊಲೀಸರು ತೀವ್ರ ವಿಚಾರಣೆ ಶುರು ಮಾಡಿದ್ದಾರೆ. ಈಗ ಪೊಲೀಸರು ಪವಿತ್ರಾ ಗೌಡ ಮೊಬೈಲ್ ಸೀಜ್ ಮಾಡಿಕೊಂಡು ವಾಟ್ಸ್‌ ಆ್ಯಪ್ ಚಾಟ್ ಹಿಸ್ಟರಿಯ ಸ್ಕ್ರೀನ್ ಶಾಟ್ ಹಿಡಿದು ಪ್ರಶ್ನೆ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ.

Related Articles

Latest Articles