ಬೆಂಗಳೂರು: ಖಾಸಗಿ ಹೋಟೆಲ್ನಲ್ಲಿ ಪ್ರಭಾ ಕೇತಾನ್ ಫೌಂಡೇಶನ್ ಆಶ್ರಯದಲ್ಲಿ ಡಾ.ವಿಕ್ರಮ್ ಸಂಪತ್ ಅವರ ಬರೆದಿರುವ ಟಿಪ್ಪು ಸುಲ್ತಾನ್ ಐತಿಹಾಸಿಕ ಕಾದಂಬರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಟಿಪ್ಪು ಸುಲ್ತಾನ್ ಕಾದಂಬರಿಯನ್ನು ಸಂಸದ ತೇಜಸ್ವಿ ಸೂರ್ಯ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ,
60 ವರ್ಷದ ಇತಿಹಾಸವುಳ್ಳ ವಕ್ಫ್ ಬೋರ್ಡ್, 1000 ವರ್ಷದ ಇತಿಹಾಸವುಳ್ಳ ನಮ್ಮ ದೇವಲಾಯ, ಕಲ್ಯಾಣಿ, ಪುಷ್ಕರಣಿಗಳನ್ನು ತನ್ನ ವಶಕ್ಕೆ ಪಡೆಯಲು ಹುನ್ನಾರ ನಡೆಸಿರುವುದು ಇತಿಹಾಸದ ಘೋರ ದುರಂತಕ್ಕೆ ಸಾಕ್ಷಿ ಎಂದರು.
ದೇಶದ ಭವಿಷ್ಯಕ್ಕೆ ಇತಿಹಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತಿಹಾಸಕಾರರು, ಸಮಾಜ ವಿಜ್ಞಾನದ ಬರಹಗಾರರ ಕೊಡುಗೆ ಅಮೂಲ್ಯವಾಗಿದೆ. ಸಂಸ್ಕೃತಿ, ಪರಂಪರೆ, ಇತಿಹಾಸದ ಸತ್ಯವನ್ನು ಕತೆ, ಕಾದಂಬರಿಗಳ ಮೂಲಕ ಮುಂದಿನ ಪೀಳಿಗೆಗೆ ಕೊಡುವ ಕೆಲಸ ಅಗತ್ಯವಾಗಿದೆ. ಅಂತಹ ಜವಾಬ್ದಾರಿಯುತ ಕೆಲಸವನ್ನು ವಿಕ್ರಮ ಸಂಪತ್ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದು, ಅದರ ಭಾಗವಾಗಿ ಸುಮಾರು ಸಾವಿರ ಪುಟದ ಟಿಪ್ಪು ಸುಲ್ತಾನ್ ಕಾದಂಬರಿ ಪ್ರಕಟವಾಗಿದೆ.
“ಈ ಹಿಂದೆ ಉರಿಗೌಡ, ನಂಜೇಗೌಡ ಹೆಸರನ್ನು ಸೃಷ್ಟಿಮಾಡಿದ್ದರಿಂದ ಬಿಜೆಪಿಗೆ ಸ್ವಲ್ಪ ಮತಗಳು ಬಂದಿರಬಹುದು; ಆದರೆ ಇತಿಹಾಸದಲ್ಲಿ ಅವರ ಹೆಸರಿಲ್ಲ. ಟಿಪ್ಪು ಸುಲ್ತಾನ್ ಧಾರವಾಹಿ ನನ್ನ ಆಸಕ್ತಿ ಕೆರಳಿಸಿತ್ತು. ಸರ್ಕಾರ ಟಿಪ್ಪು ಜಯಂತಿ ಮಾಡಲು ಮುಂದಾದಾಗ ರಾಜ್ಯಾದ್ಯಂತ ಗಲಭೆಗಳಾಗಿ, ಕೊಡಗಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ಎಲ್ಲ ಘಟನೆಗಳು ಕಾದಂಬರಿಗೆ ಪ್ರೇರಣೆ” ಎಂದು ಲೇಖಕ ಡಾ.ವಿಕ್ರಮ ಸಂಪತ್ ಹೇಳಿದರು.
ಸಮಾರಂಭದಲ್ಲಿ ನೃತ್ಯನಿರ್ದೇಶಕಿ ಮಧು ನಟರಾಜ್, ಲೇಖಕ ಡಾ.ವಿಕ್ರಮ್ ಸಂಪತ್, ಓಲಾ ಸಂಸ್ಥೆ ಮುಖ್ಯಸ್ಥ ಭಾವೀಶ್ ಅಗರವಾಲ್ ಮತ್ತಿತರರಿದ್ದರು.