ತ್ರಿಶೂರ್ನಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ದೇವರ ನಾಡು ಕೇರಳದಲ್ಲಿ ಕಮಲ ಅರಳಿದೆ. ಈ ಬಗ್ಗೆ ನಟ ವಿವೇಕ್ ಗೋಪನ್ ಪ್ರತಿಕ್ರಿಯಿಸಿದ್ದಾರೆ. ಕೇರಳದಲ್ಲಿ ಬರಲಿರುವ ಬದಲಾವಣೆಗೆ ತ್ರಿಶೂರ್ ನಾಂದಿ ಹಾಡಿದ್ದು, ಮತ್ತೊಂದು ಕಾಶ್ಮೀರವಾಗುವುದನ್ನು ತಪ್ಪಿಸಲು ಬಿಜೆಪಿ ಗೆಲುವು ಅತ್ಯಗತ್ಯ ಎಂದಿದ್ದಾರೆ.
ತ್ರಿಶೂರ್ ನಿವಾಸಿಗಳ ಬಗ್ಗೆ ನನಗೆ ಹೊಟ್ಟೆಕಿಚ್ಚು ಇದೆ. ಕೇರಳ ಮತ್ತೊಂದು ಕಾಶ್ಮೀರ ಆಗುವುದನ್ನು ತಪ್ಪಿಸಲು ಬಿಜೆಪಿ ಗೆಲುವು ಅತ್ಯಗತ್ಯ. ತ್ರಿಶೂರಿನ ಈ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದಾರೆ.

ತ್ರಿಶೂರ್ನಲ್ಲಿ ಬದಲಾವಣೆಯ ಸೂಚನೆ ಕಂಡುಬಂದಿದೆ. ಇದನ್ನು ಸುರೇಶ್ ಗೋಪಿ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದರ ಅಲೆ ಏಳಲಿದೆ. ಕೇರಳದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಸುರೇಶಣ್ಣನಿಗೆ ವೈಯಕ್ತಿಕವಾಗಿ ಕೆಲವು ಹೆಚ್ಚು ಮತಗಳು ಬಂದಿವೆ. ಆದರೆ, ಅವರು ಬಿಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದರು. ಹೀಗಾಗಿ ಅವರ ಗೆಲುವಿನಲ್ಲಿ ಪಕ್ಷದ ಮತವೇ ನಿರ್ಣಾಯಕವಾಗಿತ್ತು. ಬಿಜೆಪಿ ಕಾರ್ಯಕರ್ತರು ಅವರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ
“ಕೇರಳ ಮತ್ತೊಂದು ಕಾಶ್ಮೀರವಾಗಬಾರದು. ಹಾಗೆ ನಾವು ಬದಲಾಗಬೇಕೆಂದರೆ ಇಲ್ಲಿ ಬದಲಾವಣೆಗಳಾಗಬೇಕು. ಹಾಗಾಗಿ ತ್ರಿಶೂರ್ ನಲ್ಲಿ ಅನಿವಾರ್ಯ ಗೆಲುವು ಸಾಧಿಸಲಾಗಿದೆ. ತ್ರಿಶೂರಿನ ಜನರನ್ನು ಕಂಡರೆ ಹೊಟ್ಟೆಕಿಚ್ಚು ಪಡುತ್ತೇನೆ. ಇಷ್ಟು ವರ್ಷ ತ್ರಿಶೂರ್ ನಿಂದ ದುಡಿದ ಫಲ ಸುರೇಶಣ್ಣನಿಗೆ ಸಿಕ್ಕಿತು. ಕೇರಳದಲ್ಲಿ ಕಮಲ ಮುದುಡುತ್ತದೆ ಎಂದವರಿಗೆ ಇದೇ ಉತ್ತರ. ಅವರು ಟ್ರೋಲ್ಗಳ ಮುಂದೆ ಆಡಳಿತ ನಡೆಸುತ್ತಾರೆ ಎಂದು ವಿವೇಕ್ ಗೋಪನ್ ಹೇಳಿದ್ದಾರೆ.