Saturday, May 24, 2025

ಲವ್​ ಜಿಹಾದ್​ ತಡೆಗೆ ಶ್ರೀರಾಮಸೇನೆಯ ಸಹಾಯವಾಣಿ; 2ನೇ ವಾರಕ್ಕೆ 600ಕ್ಕೂ ಕರೆಗಳು..! ಸ್ಪೋಟಕ ಮಾಹಿತಿ ಬಹಿರಂಗ

ಧಾರವಾಡ: ರಾಜ್ಯದಲ್ಲಿ ಅನ್ಯಮತೀಯ ಯುವಕರ ಪ್ರೇಮಕ್ಕೆ ಬಿದ್ದು ಜೀವ – ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಹಿಂದೂ ಯುವತಿಯರು. ನೇಹಾ ಕೊಲೆ ಪ್ರಕರಣ ಸೇರಿದಂತೆ ಹಲವು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೇ, ರಾಜ್ಯದಲ್ಲಿ ಅವ್ಯಾಹತವಾಗಿ ಲವ್ ಜಿಹಾದ್ ನಡೀಯುತ್ತಾ ಇದೆ ಎಂಬ ಶ್ರೀರಾಮಸೇನೆ ಆರೋಪಕ್ಕೂ ಪುಷ್ಠಿ ಬಂದಂತೆ ಆಗಿತ್ತು.

ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲೇಬೇಕು, ಲವ್ ಜಿಹಾದ್ ವಿರುದ್ಧ ಹೇಗಾದರೂ ಹೋರಾಟ ಮಾಡಲೇಬೇಕು, ಜೊತೆಗೆ ಪ್ರೀತಿಯ ಬಲೆಗೆ ಸಿಲುಕಿ ಬಳಿಕ ತಮ್ಮ ಜೀವವನ್ನೇ ಕಳೆದುಕೊಳ್ಳೋ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕು ಎಂದು ವಿಚಾರ ಮಾಡಿದ ಶ್ರೀರಾಮಸೇನೆ ಇದೇ ಮೇ 29ರಂದು ಸಹಾಯವಾಣಿ ಆರಂಭಿಸಿತ್ತು.

ಸಂಕಷ್ಟದಲ್ಲಿರುವ ಹಿಂದು ಹೆಣ್ಣುಮಕ್ಕಳು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ಸಹಾಯ ಮಾಡುತ್ತೇವೆ, ರಕ್ಷಣೆಗೆ ನಿಲ್ಲುತ್ತೇವೆ ಎಂದು ಶ್ರೀರಾಮಸೇನೆ ಹೇಳಿತ್ತು. ಹೀಗಾಗಿ ಸಹಾಯವಾಣಿ ಆರಂಭವಾಗುತ್ತಿದ್ದಂತೆಯೇ ಎರಡನೇ ವಾರದಲ್ಲಿ ಹಿಂದೂ ಹೆಣ್ಣುಮಕ್ಕಳಿಂದ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿವೆ ಎಂದು ಬಲ್ಲ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

‘ಯಾವಾಗ ಸಹಾಯವಾಣಿ ಆರಂಭವಾಯಿತೋ ಆಗ ಅನೇಕ ಹೆಣ್ಣುಮಕ್ಕಳಿಗೆ ತಮ್ಮ ದುಃಖ, ನೋವು ಕೇಳೋರು ಒಬ್ಬರು ಇದಾರಲ್ಲ ಎನ್ನುವ ಭಾವನೆ ಬಂದಿದೆ ಎಂಬುವುದಾಗಿ ಕರ್ನಾಟಕದ ಪ್ರಸಿದ್ಧ ಸುದ್ದಿ ಸಂಸ್ಥೆ ಟಿವಿ 9 ಕನ್ನಡ ವರದಿ ಪ್ರಕಟಿಸಿದೆ.

ಹೀಗಾಗಿ ಈ 600 ಫೋನ್ ಕರೆಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ 100ಕ್ಕೂ ಮಹಿಳೆಯರು ಈಗಾಗಲೇ ಲವ್ ಜಿಹಾದ್ ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರಂತೆ. ಅದರಲ್ಲಿ ಬಹುತೇಕರದ್ದು ವಿಚಿತ್ರ ಹಾಗೂ ಯಾರ ಮುಂದೆಯೂ ಹೇಳಿಕೊಳ್ಳಲಾಗದ ಘಟನೆಗಳಿವೆಯಂತೆ. ಈ ಮಹಿಳೆಯರಿಗೆ ಎಲ್ಲ ನೆರವು ನೀಡುವುದಕ್ಕಾಗಿಯೇ ಶ್ರೀರಾಮ ಸೇನೆ ವಿಶೇಷ ತಂಡ ಈಗ ಸಜ್ಜಾಗುತ್ತಿದೆ. ಕಾನೂನಾತ್ಮಕ ತೊಡಕುಗಳಿದ್ದಲ್ಲಿ ಅವುಗಳನ್ನು ಕಾನೂನಾತ್ಮಕವಾಗಿಯೇ ಬಗೆ ಹರಿಸಲು ನಿರ್ಧರಿಸಿದ್ದಾರಂತೆ. ಈಗಾಗಲೇ 15 ಪ್ರಕರಣಗಳನ್ನು ತಮ್ಮ ಮಟ್ಟದಲ್ಲಿಯೇ ಇತ್ಯರ್ಥ ಸಹ ಮಾಡಿದ್ದಾರೆ.

ಇಷ್ಟು ದಿನ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುತ್ತ ಬಂದಿದ್ದ ಶ್ರೀರಾಮ ಸೇನೆ ಈಗ ನೇರವಾಗಿಯೇ ಸಹಾಯವಾಣಿ ಮೂಲಕ ಲವ್ ಜಿಹಾದ್ ವಿರುದ್ಧ ಸಮರಕ್ಕೆ ನಿಂತಿದ್ದು, ಮುಂದೆ ಹೇಗೆಲ್ಲ‌ ಇದು ಪರಿಣಾಮಕಾರಿಯಾಗಿ ಕಾರ್ಯ ಮಾಡಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.

Related Articles

Latest Articles