Sunday, May 18, 2025

ಪುತ್ತೂರು: ಕಾಡಾನೆ ದಾಳಿ – ಮಹಿಳೆ ದುರ್ಮರಣ

ಪುತ್ತೂರು: ಮುಂಜಾನೆಯ ಹೊತ್ತಿನಲ್ಲೇ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌. ಕಣಿಯಾರು ಮಲೆ ಅರಣ್ಯದಂಚಿನಲ್ಲಿರುವ ಅರ್ತಿಯಡ್ಕ ಸಿಆರ್‌ಸಿ ಕಾಲನಿಯಲ್ಲಿ ಈ ದುರಂತ ಸಂಭವಿಸಿದೆ.

ಏಪ್ರಿಲ್ 29ರ ಮಂಗಳವಾರದಂದು, ರಬ್ಬರ್ ಹಾಲು ಸಂಗ್ರಹಿಸಲು ಮನೆಯಿಂದ ಹೊರಟಿದ್ದ ಅರ್ತಿಯಡ್ಕದ ಮಹಿಳೆಯ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಗಡಿ ಭಾಗವಾದ ಕನ್ಯಾರು ಮಲೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಸೇಲಮ್ಮ (೬೦) ಮೃತಪಟ್ಟ ದುರ್ದೈವಿ

ಮಹಿಳೆಯೂ ಎಂದಿನಂತೆ ಇಂದು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಆನೆಯ ರೌದ್ರಾವತಾರದ ಎದುರು ನಲುಗಿದ ಆ ಮಹಿಳೆ. ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Related Articles

Latest Articles