ಪುತ್ತೂರು: ಭಾರತ ದೂರ ಸಂಪರ್ಕ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ದೇಶದ ಜನತೆಗೆ ಮೊಬೈಲ್ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕದ ಹಲವು ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಆದರೆ ಈ ಧ್ವನಿ ಮತ್ತು ಕಂಪನಕ್ಕೆ ಅನೇಕ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಆಪತ್ತಾಗಿ ಪರಿಣಮಿಸಿದೆ.
ಹೌದು ತರಗತಿಯೊಳಗೆ ಮೊಬೈಲ್ ಗೆ ನಿರ್ಬಂಧ ಹೇರಲಾಗಿತ್ತಾದರೂ ಇವತ್ತು ಮೊಳಗಿದ ಬೀಪ್ ಸೌಂಡ್ ಗೆ ಪುತ್ತೂರಿನ ಕಾಲೇಜೊಂದರಲ್ಲಿ ತರಗತಿಯೊಳಗೆ ಹಲವು ವಿದ್ಯಾರ್ಥಿಗಳ ಮೊಬೈಲ್ ಫೋನ್ ಶಿಕ್ಷಕರ ವಶಕ್ಕೆ ಸೇರಿದೆ.
ಮೊಬೈಲ್ ಸೈಲೆಂಟ್ ಮಾಡಿ ತರಗತಿಯೊಳಗೆ ಹೋದ ವಿದ್ಯಾರ್ಥಿಗಳೆಲ್ಲರ ಮೊಬೈಲ್ ಏಕಕಾಲಕ್ಕೆ ಧ್ವನಿ ಮತ್ತು ಕಂಪನವಾಗಿದೆ. ಈ ಶಬ್ದ ಶಿಕ್ಷರನ್ನು ಎಚ್ಚರಿಸಿದೆ. ಶಿಕ್ಷಕರು ಮೊಬೈಲ್ ಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
- ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ: ಸಚಿವ ಜಾರ್ಜ್ ಉಡಾಫೆ ಉತ್ತರ
- ಪಾಕ್ ಬೆಡಗಿಗೆ ಕಾರವಾರ ನೌಕಾನೆಲೆಯ ಮಾಹಿತಿ, ಪ್ರತಿ ತಿಂಗಳು 5,000 ಜಮೆ - ಎನ್ಐಎಯಿಂದ ಇಬ್ಬರು ಅರೆಸ್ಟ್ – ಪ್ರಕರಣದ ಸಂಪೂರ್ಣ ವರದಿ
- ಸರಕಾರಿ ಪ್ರಾಥಮಿಕ ಶಾಲೆ ಬಾಳೆ ಮೂಲೆ ಇದರ ಸ್ಥಾಪಕ ರೂವಾರಿ ಸಂಜೀವ ರೈ ಚಿಲ್ಮೆತ್ತಾರು ಅವರಿಗೆ ಗೌರವಾರ್ಪಣೆ
- ಭಾರತ ವಿಶ್ವದ ಟಾಪ್-5 ಶಕ್ತಿಶಾಲಿ ಮಿಲಿಟರಿ ಶಕ್ತಿಗಳಲ್ಲಿ ಒಂದು.! – ವರದಿ
- BMTC ಟಿಕೆಟ್ ಪೇಪರ್ನಲ್ಲಿ ತರಕಾರಿ ಬಿಲ್ ನೀಡುತ್ತಿದ್ದ ವ್ಯಾಪಾರಿ – ಹಲವು ಅನುಮಾನ