ಮಂಗಳೂರು: ನಗರಕ್ಕೆ ಎಂಟ್ರಿ ಕೊಟ್ಟು ಬೆಚ್ಚಿಬೀಳಿಸಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೋಡಿಕಲ್ ನಲ್ಲಿ ಜುಲೈ 6ರ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದರು, ಈ ಕೃತ್ಯ ಬೆಳಕಿಗೆ ಬಂದು ಮಂಗಳೂರಿನ ಜನರಲ್ಲಿ ಹೊಸ ಭಯ ಹುಟ್ಟಿಸಿತ್ತು.
ಮಂಗಳವಾರ ಮುಂಜಾನೆ 3.30ರ ಅವಧಿಯಲ್ಲಿ 4 ಮಂದಿ ದರೋಡೆಕೋರರ ತಂಡ ಉರ್ವ ಕೊಟ್ಟಾರ ಬಳಿಕ ಕೋಟೆಕಣಿ ಎಂಬಲ್ಲಿನ ಮನೆಗೆ ನುಗ್ಗಿ ಕಿಟಕಿ ಕತ್ತರಿಸಿ ದರೋಡೆ ನಡೆಸಿ ಪರಾರಿಯಾಗಿದ್ದರು.
ಘಟನೆ : ದಿನಾಂಕ 9/07/2024 ಬೆಳಗಿನ ಜಾವ ಚಡ್ಡಿಗ್ಯಾಂಗ್ ದರೋಡೆಕೋರರು ಮಂಗಳೂರಿನ ಒಂದು ಮನೆಯಲ್ಲಿ ದರೋಡೆ ಮಾಡಿ ಹಲ್ಲೆ ಮಾಡಿ ಎಸ್ಕೇಪ್ ಆದ ಘಟನೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಧ್ಯಪ್ರದೇಶ ಮೂಲದ ರಾಜು ಸಿಂಘಾನಿಯಾ, 24, ಮಯೂರ್, 30, ಬಾಲಿ, 22, ಮತ್ತು 21 ವರ್ಷ ವಯಸ್ಸಿನ ವಿಕ್ಕಿ ಎಂದು ಗುರುತಿಸಲಾಗಿದೆ.
- ಅಬಕಾರಿ ಅಧಿಕಾರಿಗಳಿಂದ ಅನ್ಯರಾಜ್ಯದ ಕಾರ್ಮಿಕರ ದರೋಡೆ – ನಾಲ್ವರ ಬಂಧನ
- ದ್ವಿಚಕ್ರ ವಾಹನ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು
- ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವು.. ಒಂದು ಹಣ್ಣಿನ ಬೆಲೆ ಬರೋಬ್ಬರಿ 10 ಸಾವಿರ ರೂಪಾಯಿ
- ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
- ಕೋರ್ಟ್ ಆವರಣದಲ್ಲಿಯೇ ವಕೀಲೆಗೆ ಹಲ್ಲೆಗೈದ ಹಿರಿಯ ವಕೀಲ – ದೂರು ದಾಖಲು
- ಅಂಗನವಾಡಿ ಆರಂಭವಾಗಿ 50 ವರ್ಷ: ಸುವರ್ಣ ಮಹೋತ್ಸವ ಆಚರಣೆಗೆ ನಿರ್ಧಾರ
ಮಂಗಳೂರಿನ ಅಂತಾರಾಜ್ಯ ಚಡ್ಡಿಗ್ಯಾಂಗ್ ನವರನ್ನು ಬಂಧಿಸಲು ನಿಖರ ಮಾಹಿತಿ ನೀಡಿದ KSRTC ಮಂಗಳೂರು 3 ನೇ ಘಟಕದ ಸಿಬ್ಬಂದಿಗಳಾದ ಚಾಲಕ ಬಸವರಾಜ್ ಅಳ್ಳಪ್ಪ ಹಾಗೂ ಚಾಲಕ / ನಿರ್ವಾಹಕ ಹನುಮಂತ ಅಟಗಲ್ಲು ಹಾಗೂ ಖಾಸಾಗಿ ಚಾಲಕರಾದ ಮಹೇಶ್ ಹಾಗೂ ನಿರ್ವಹಕರಾದ ಸೀನಪ್ಪ ಇವರಿಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿದ್ದಾರೆ.
ಚಡ್ಡಿ ಗ್ಯಾಂಗ್ ನಾಲ್ವರು ಮನೆಯವರ ಕಾರಿನಲ್ಲಿ ಮೂಲ್ಕಿ ತೆರಳಿದ್ದು ಆಮೇಲೆ ksrtc ಬಸ್ಸು ಹತ್ತಿದಾರೆ ಎಂಬ ಮಾಹಿತಿ ಅನ್ವಯ ಪೊಲೀಸರು KSRTC ಮಂಗಳೂರು 3 ನೇ ಘಟಕಕ್ಕೆ ಬಂದು ವಿಚಾರಿಸಿ ವಿಡಿಯೋ ತೋರಿಸಿದಾಗ ಮೇಲೆ ತಿಳಿಸಿದ ಚಾಲಕ ಬಸವರಾಜ್ ಬಸ್ಸಿನ ವಿಡಿಯೋ ನೋಡಿ, ಇದು ನಮ್ಮ ಘಟಕದ ಕಬ್ಬರಗಿ ಮಂಗಳೂರು ಸಾರಿಗೆ ಬಸ್ಸು ಎಂದು ತಿಳಿಸಿರುತ್ತಾರೆ.
ಆ ಬಸ್ಸಿನ ಚಾಲಕ / ನಿರ್ವಾಕರಾದ ಹನುಮಂತ ಅಟಗಲ್ಲು ಅವರನ್ನು ವಿಚಾರಿಸಿದಾಗ ಹೌದು, ಅವರು 4 ಜನ ಅಪರಿಚಿತರು ಮೂಲ್ಕಿ ಬಸ್ಟ್ಯಾಂಡ್ ನಲ್ಲಿ ನಮ್ಮ ಬಸ್ಸು ಹತ್ತಿದ್ದು, ಆಮೇಲೆ ಮಂಗಳೂರಿನಲ್ಲಿ ಇಳಿದು, ನಮ್ಮದೇ ಅಂದರೆ ಮಂಗಳೂರು 3 ನೇ ಘಟಕದ ಬೆಳಿಗ್ಗೆ 5.30 ಹೊರಡುವ ಮಂಗಳೂರು ಬೆಂಗಳೂರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿರುತ್ತಾರೆ ಎಂದು ನಿಖರ ಮಾಹಿತಿ ನೀಡಿರುತ್ತಾರೆ.
ತದನಂತರ ಪೊಲೀಸರು ಬೆಂಗಳೂರು ಚಾಲಕರ ಮತ್ತು ನಿರ್ವಾಕರಿಗೆ ವಿಚಾರಿಸಿದಾಗ ಕಳ್ಳರ ಇರುವಿಕೆ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆ ಮಾಹಿತಿ ಪಡೆದು ಸಕ್ಲೇಶಪುರ ಪೊಲೀಸರು ಈ ಚಡ್ಡಿಗ್ಯಾಂಗ್ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.