Wednesday, April 23, 2025

ಮಂಗಳೂರು; ಧರ್ಮನಿಂದನೆ ಆರೋಪ – ಶಿಕ್ಷಕಿ ಅಮಾನತು..! ಶ್ರೀರಾಮ ಮಾತ್ರವಲ್ಲದೆ ಕೊರಗಜ್ಜ, ನಾಗ, ಕಂಬಳ, ಅಯೋಧ್ಯೆಯ ಬಗ್ಗೆಯೂ ಅವಹೇಳನ ಮಾಡಿದ್ರಾ.? ವಿದ್ಯಾರ್ಥಿನಿಯರು ಏನಂದ್ರು.?

ಮಂಗಳೂರು: ತರಗತಿಯಲ್ಲಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಮತ್ತು ಶಾಸಕರಿಬ್ಬರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದ ಜೆರೋಸಾ ಕಾನ್ವೆಂಟ್‌ನ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಶಾಲಾ ಆಡಳಿತ ವಜಾ ಮಾಡಿದ್ದು ತಿಳಿದೇ‌ ಇದೆ. ವಜಾಗೊಳಿಸುವ ಆದೇಶ ಓದುತ್ತಿದ್ದಂತೆ ಪೋಷಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.

ಇನ್ನು ವಜಾ ಗೊಳಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೇಳಿಸಿತು‌. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿರುವ ವಿದ್ಯಾರ್ಥಿನಿಯರು ಆಘಾತಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದಾರೆ. ಶ್ರೀರಾಮ ಮಾತ್ರವಲ್ಲದೆ ಕೊರಗಜ್ಜ, ನಾಗ, ಕಂಬಳ, ಆಯೋಧ್ಯೆಯ ಬಗ್ಗೆಯೂ ಕೀಳಾಗಿ ಮಾತನಾಡಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ‌.

Related Articles

Latest Articles