ತೃತಿಯ ಲಿಂಗಿಯ ಪ್ರೀತಿಗೆ ಬಿದ್ದು ಯುವಕನೋರ್ವ ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ. ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗಣೇಶ್ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ.
ಗಣೇಶ್ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.
ಗಣೇಶ್ ಮತ್ತು ದೀಪು ವಿವಾಹದ ಘಟನೆಯನ್ನು ಪತ್ರಕರ್ತರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್ ಆಗಿದೆ. ಬಳಿಕ ಗಣೇಶ್ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.