ಕಾಸರಗೋಡು: ಆತ್ಮಹತ್ಯೆ ಮಾಡಲೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ವರದಿಯಾಗಿದೆ.
ಕುಂಬಳೆ ಸಮೀಪದ ಬಂದ್ಯೋಡು ಅಡ್ಕ ಒಳಯಂ ರೋಡ್ ನಿವಾಸಿ ದಿ । ಮೂಸ ಎಂಬವರ ಪುತ್ರಿ ಆಯಿಶತ್ ರಿಯಾನ (24) ಮೃತಪಟ್ಟವರು. ಜು. 23ರಂದು ತಾಯಿ ಮನೆಯ ಬಾತ್ರೂಂನಲ್ಲಿ ಆಯಿಶತ್ ರಿಯಾನ ನೇಣು ಬಿಗಿದು ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದಾರೆ.
ಈ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ದೇರಳಕಟ್ಟೆ ಆಸ್ಪತ್ರೆಯಲ್ಲಿ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು. ೨೫ರ ಮುಂಜಾನೆ ರಿಯಾನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಆತ್ಮಹತ್ಯೆಗೆ ಕಾರಣವೇನು?
ಆಯಿಶತ್ ರಿಯಾನಳ ಮದುವೆ ಮೂರೂವರೆ ವರ್ಷಗಳ ಹಿಂದೆ ಬಶೀರ್ರೊಂದಿಗೆ ನಡೆದಿತ್ತು. ಇವರಿಗೆ ಎರಡೂವರೆ ವರ್ಷದ ಮೊಹಮ್ಮದ್ ಬಿಲಾಲ್ ಎಂಬ ಪುತ್ರನಿದ್ದಾನೆ. ಮಗು ಜನಿಸಿದ ಆರು ತಿಂಗಳ ಬಳಿಕ ಆಯಿಶತ್ ರಿಯಾನಳಿಗೆ ಪತಿ ಹಲ್ಲೆಗೈದು ಆಕೆಯನ್ನು ತಾಯಿ ಮನೆಗೆ ತಂದು ಬಿಟ್ಟಿದ್ದಾನೆಂದು ಆಯಿಶತ್ ರಿಯಾನಳ ತಂದೆಯ ಸಹೋದರ ಮೆಹಮ್ಮದ್ ಅಡ್ಕ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಯಿಶತ್ ರಿಯಾನ ತಾಯಿ ಮನೆಯಲ್ಲೇ ಇದ್ದಳು.
ಹಿರಿಯರು ಸೇರಿಕೊಂಡು ಮಾತುಕಥೆ ನಡೆಸಿದ್ದಾರೆ. ಬಶೀರ್ ರಿಯಾನಳಿಗೆ ಹಣಕಾಸಿನ ನೆರವು ನೀಡುವಂತೆ ಒಪ್ಪಂದ ಮಾಡಲಾಗಿತ್ತು. ಗಂಡನ ಕಿರುಕುಳದಿಂದ ಹೆಣ್ಣು ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಮೊಹಮ್ಮದ್ ಆರೋಪಿಸಿದ್ದಾರೆ.
With input from kannada.karaval.com
Kasaragod: An incident has been reported in which a woman who was seriously injured when the rope fell while trying to hang herself, died in the hospital. The resident of Bandyodu Adka Uyayam Road near Kumble. Aishat Riyana (24), daughter of Musa, died.