ಕುಂಬಳೆ: ಹಣ್ಣು ವ್ಯಾಪಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಂಬಳೆ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ-ಹಣ್ಣು ಹಂಪಲು ವ್ಯಾಪಾರಿ ಸಂತೋಷ್ ಮೃತಪಟ್ಟವರು.
ಅಂಗಡಿ ಸಂಕೀರ್ಣದ ಮೇಲಿನ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರುವಾಡು ನಿವಾಸಿ ಕೃಷ್ಣನ್-ಪ್ರೇಮಾವತಿ ದಂಪತಿಯ ಪುತ್ರ ಸಂತೋಷ್ ಯಾನೆ ಸಂತು(40) ಆತ್ಮಹತ್ಯೆಗೆ ಶರಣಾದವರು.
ಮೇ. 6ರ ಮಂಗಳವಾರ ಮಧ್ಯಾಹ್ನ ಅರಿಮಲ ಕಾಂಪ್ಲೆಕ್ಸ್ ಮೇಲೆ ಶೀಟ್ ಹಾಸಿದ ಮಾಡಿನ ಕಬ್ಬಿಣಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು.
ಈ ಕಟ್ಟಡದ ಕೆಳಗೆ ವ್ಯಾಪಾರ ಮಾಡುವವರ ಸಾಮಾಗ್ರಿಗಳನ್ನು ಇಲ್ಲಿ ಇಡಲಾಗುತ್ತದೆ. ಸಾಮಾಗ್ರಿಯನ್ನು ತೆಗೆಯಲು ಹೋದಾಗ ಸಂತೋಷ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.