ಪುತ್ತೂರು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪುತ್ತೂರು ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರ ವಿರುದ್ದ ಮುನೀರ್ ಕಾಟಿಪಳ್ಳ ಧರ್ಮಾಧಾರಿತ ಅಪಮಾನಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದೆ. ವಾರ್ತಾಪತ್ರಿಕೆಯ ಒಂದರ ಯೂಟ್ಯೂಬ್ ಚಾನೆಲ್ನಲ್ಲಿ ಮುನೀರ್ ಕಾಟಿಪಳ್ಳ, “ಡಾ. ಗಣೇಶ್ ಅವರು ಕೋಮು ಮನೋಭಾವ ಹೊಂದಿದ್ದು, ವೈದ್ಯಧರ್ಮಕ್ಕೆ ವ್ಯತಿರಿಕ್ತವಾಗಿ ನಡೆಯುವುದರಿಂದ ವೈದ್ಯರ ಹೋರಾಟದ ನೇತೃತ್ವ ವಹಿಸಲು ಅವರಿಗೆ ನೈತಿಕ ಹಕ್ಕಿಲ್ಲ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಮುನೀರ್ ಕಾಟಿಪಳ್ಳ ವಿರುದ್ದ ತಕ್ಷಣ ಎಫ್ಐಆರ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಐಎಂಎ ಪುತ್ತೂರು ಶಾಖೆಯ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್’ವೊಂದರಲ್ಲಿ ಮುನೀರ್ ಕಾಟಿಪಳ್ಳ ಅವರು, “ಡಾ. ಗಣೇಶ್ ಕೋಮು ಮನೋಭಾವ ಹೊಂದಿದ್ದು, ವೈದ್ಯಧರ್ಮಕ್ಕೆ ವ್ಯತಿರಿಕ್ತವಾಗಿ ನಡೆಯುವುದರಿಂದ ವೈದ್ಯರ ಹೋರಾಟದ ನೇತೃತ್ವ ವಹಿಸಲು ಅವರಿಗೆ ನೈತಿಕ ಹಕ್ಕಿಲ್ಲ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯು ಡಾ. ಮುದ್ರಾಜೆ ಅವರ ವೈದ್ಯಕೀಯ ಸೇವೆ ಮತ್ತು ಐಎಂಎ ಸಂಘಟನೆಯಲ್ಲಿನ ಅವರ ನಿಷ್ಠೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಐಎಂಎ ಆಕ್ರೋಶ ವ್ಯಕ್ತಪಡಿಸಿದೆ.



ಪುತ್ತೂರು ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯೆಯೊಬ್ಬರ ಮೇಲಿನ ದೌರ್ಜನ್ಯ ಖಂಡಿಸಿ ಡಾ. ಮುದ್ರಾಜೆ ನೇತೃತ್ವದಲ್ಲಿ ನಡೆದ ಯಶಸ್ವಿ ಹೋರಾಟದ ನಂತರ ಈ ಹೇಳಿಕೆ ಬಂದಿರುವುದು ಗಮನಾರ್ಹ. ಈ ಹೋರಾಟದಿಂದಾಗಿ ದೌರ್ಜನ್ಯ ಪ್ರಕರಣದ ಎಫ್ಐಆರ್ನಲ್ಲಿ ‘ಕರ್ನಾಟಕ ವೈದ್ಯಕೀಯ ಸೇವಾ ಸಿಬ್ಬಂದಿ ಹಾಗೂ ವೈದ್ಯಕೀಯ ಸಂಸ್ಥೆಗಳ ಮೇಲಿನ ಹಿಂಸಾಚಾರ ತಡೆ ಕಾಯ್ದೆ 2009 (2024ರ ತಿದ್ದುಪಡಿ)’ಯನ್ನು ಸೇರಿಸಲು ಸಾಧ್ಯವಾಗಿತ್ತು.ಡಾ. ಮುದ್ರಾಜೆ ಅವರು ಈ ಧಾರ್ಮಿಕ ನಿಂದನೆ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ, ತಿದ್ದುಪಡಿ ಕಾಯ್ದೆಯಡಿ ಇದು ಗಂಭೀರ ಅಪರಾಧವಾಗಿದ್ದರೂ, ಪೊಲೀಸರು ಇದನ್ನು ಸಾಮಾನ್ಯ ಆರೋಪವೆಂದು ದಾಖಲಿಸಿಕೊಂಡಿರುವುದು ಅತ್ಯಂತ ಶೋಚನೀಯ ಎಂದು ಐಎಂಎ ತಿಳಿಸಿದೆ.
ಮುನೀರ್ ಕಾಟಿಪಳ್ಳ ಅವರ ವಿರುದ್ಧ ತಿದ್ದುಪಡಿ ಮಾಡಿದ ಎಫ್ಐಆರ್ ದಾಖಲಿಸಿ, 2009ರ (2024ರ ತಿದ್ದುಪಡಿ) ಕಾಯ್ದೆ. ಮಾನಹಾನಿ ಮತ್ತು ಕೋಮುದ್ವೇಷದ ಹೇಳಿಕೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಡಾ. ಮುದ್ರಾಜೆ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಐಎಂಎ ಒತ್ತಾಯಿಸಿದೆ.