Tuesday, January 21, 2025

ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಶಾಕ್.? – ಹಲವರಿಗೆ ಗಾಯ

ಹಾಸನ: ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್‌ಗೊಂಡಿದೆ ಎಂಬ ವದಂತಿಯಿಂದ ಧಿಡೀರ್ ನೂಕು ನುಗ್ಗಲಾಗಿದೆ. ಈ ವೇಳೆ ದರ್ಶನಕ್ಕೆ ಸರತಿ ಸಾಲಿನ ಬಳಿ ನಿಂತಿದ್ದ ಮಹಿಳೆಯರು ಎದ್ದು ಬಿದ್ದು ಓಡಲು ಯತ್ನಿಸಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾಗಿ ನ್ಯೂಸ್‌ಫರ್ಸ್ಟ್ ವರದಿ ಮಾಡಿದೆ.

ಜಗತ್​ ಪ್ರಸಿದ್ಧ ಹಾಸನಾಂಬೆಯನ್ನು ಕಾಣಲು ದಿನಾಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅದರಂತೆಯೆ ಇಂದು ಕೂಡ ಸಾಕಷ್ಟು ಜನರು ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ನ್ಯೂಸ್‌ಫರ್ಸ್ಟ್ ಕನ್ನಡದಲ್ಲಿ ಪ್ರಕಟವಾದ ವರದಿ ಪ್ರಕಾರ ಸರತಿ ಸಾಲಿನಲ್ಲಿ ನಿಂತವರಿಗೆ ಕರೆಂಟ್​ ಶಾಕ್​ ಹೊಡೆಯುತ್ತಿದೆ ಎಂಬ ವದಂತಿ ಮಾತು ಕೇಳಿ ಜನರು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

ಇನ್ನು ಕಾಲ್ತುಳಿತಕ್ಕೆ ಒಳಗಾದ ಕೆಲವರನ್ನು ಸ್ಥಳೀಯರು ಹೊರಗೆಳೆದ್ದಾರೆ. ಭಕ್ತರನ್ನು ಈ ವೇಳೆ ಭಯಬೀತರಾಗಿದ್ದಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇನ್ನು ಪ್ರಜಾವಾಣಿ ವರದಿ ಪ್ರಕಾರ, ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ದ ತಂತಿಯಿಂದ ಈ ಘಟನೆ ನಡೆದಿದೆ. ಬ್ಯಾರಿಕೇಡ್‌ಗಳಲ್ಲಿ ವಿದ್ಯುತ್ ಪ್ರವಹಿಸಿ ಘಟನೆ ನಡೆದಿದ್ದಾಗಿ ವರದಿ ಭಿತ್ತರಿಸಿದೆ.

Related Articles

Latest Articles