Friday, March 21, 2025

ಅರ್ಜುನ ಅಜರಾಮರ..! ಸಕಲ ಗೌರವದೊಂದಿಗೆ ಅಂತಿಮ ಸಂಸ್ಕಾರ

ಕಾಡಾನೆಯೊಂದನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಜುನ ಬಲಿಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಒಟ್ಟು ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿರುವ ಕೀರ್ತಿ ಸಂಪಾದಿಸಿದ್ದ ಅರ್ಜುನ ಆನೆ ಸಾವಿನ ಬಗ್ಗೆ ವಿವಾದಗಳೂ ಸಹ ಹುಟ್ಟಿಕೊಳ್ಳುತ್ತಿವೆ.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಜನಸಾಮಾನ್ಯರು ಹಾಗೂ ಮಾವುತರು ಕಿಡಿಕಾರಿದ್ದಾರೆ.

ತೀವ್ರವಾಗಿ ಗಾಯಗೊಂಡು ಅಸುನೀಗಿದ ಅರ್ಜುನನಿಗೆ ಹಾಸನ ಜಿಲ್ಲೆಯ ಸಕಲೇಶಪುರದ ಬಳಿಯ ದಬ್ಬಳ್ಳಿಕಟ್ಟೆಯಲ್ಲಿರುವ ಕೆಎಫ್‌ಟಿಸಿ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಅರ್ಜುನನ ಮಾವುತ ವಿನು ಇನ್ನೆಂದೂ ಬಾರದ ಅರ್ಜುನನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತು ಅರ್ಜುನನ ಜತೆ ತನ್ನನ್ನೂ ಸಹ ಮಣ್ಣು ಮಾಡಿ ಎಂದು ಗೋಳಿಡುತ್ತಿದ್ದರು.

Related Articles

Latest Articles