Sunday, May 18, 2025

ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿ

ರೋಗಿ ವೇಶದಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯೆಯ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಹೊಂಡು ಖದೀಮರು ಪರಾರಿ ಆಗಿರುವ ಘಟನೆ ಕಳೆದ ಜುಲೈ 30 ರಂದು ಕಾಳಿಕಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಆ ಮೂಲಕ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

ಜುಲೈ 30 ರಂದು ಇಬ್ಬರು ಖದೀಮರು ಬೈಕ್ ಮೇಲೆ ಆಸ್ಪತ್ರೆಯ ಬಳಿ ಬಂದಿದ್ದು, ಇಬ್ಬರ ಪೈಕಿ ಓರ್ವನು ಆಸ್ಪತ್ರೆಯೊಳಗೆ ಹೋದರೆ ಮತ್ತೋರ್ವ ಬೈಕ್ ಮೇಲೆ ಕಾಯುತ್ತಾ ನಿಂತಿದ್ದ. ಹಲ್ಲು ನೋವು ಎಂದು ರೋಗಿಯ ಸೋಗಿನಲ್ಲಿ ಖದೀಮ ಎಂಟ್ರಿ ಕೊಟ್ಟಿದ್ದು, ಇಂಗ್ಲಿಷ್​​ನಲ್ಲಿ ಮಾತನಾಡುತ್ತ ಪಾಟೀಲ್ ಕ್ಲಿನಿಕ್ ವೈದ್ಯೆ ಡಾ.ಸರೋಜಿನಿ ಪಾಟೀಲ್ ಎಂಬುವರ 11 ಗ್ರಾಂ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ದಾನೆ.

ವೈದ್ಯೆಯ ಸರ ಕಿತ್ತುಕೊಂಡು ಓಡಿದ ಓರ್ವ ಕಳ್ಳತನನ್ನು ಮತ್ತೋರ್ವ ಆತನನ್ನು ಬೈಕ್​ನಲ್ಲಿ ಪಿಕ್​ಅಪ್ ಮಾಡಿಕೊಂಡು ಪರಾರಿ ಆಗಿದ್ದಾರೆ. ವೈದ್ಯೆ ಸರೋಜಿನಿ ಕೂಗುತ್ತಾ ಹೊರಗಡೆ ಬರುವಷ್ಟರಲ್ಲಿ ಇಬ್ಬರು ಪರಾರಿ ಆಗಿದ್ದರು.

Related Articles

Latest Articles