ಬಂಟ್ವಾಳ: ಕರುನಾಡ ಸ್ಪೈಡರ್ ಮ್ಯಾನ್ ಎಂದು ಪ್ರಸಿದ್ದಿ ಪಡೆದಿರುವ ಜ್ಯೋತಿರಾಜ್ ಅವರು, ಇತಿಹಾಸ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬರಿಗೈನಲ್ಲಿ ಹಲವು ಬೆಟ್ಟಗಳನ್ನು ಏರಿ ದಾಖಲೆ ಬರೆದಿರುವ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್ ಬೃಹತ್ ಬೆಟ್ಟವಾದ ಕಾರಿಂಜ ಏರಲು ಸಿದ್ಧತೆ ನಡೆಸಿದ್ದಾರೆ.
ಮಾ.23 ರ ಬೆಳಿಗ್ಗೆ 10 ಗಂಟೆಗೆ ಈ ಸಾಹಸ ಮಾಡಲಿದ್ದಾರೆ. ಸಮುದ್ರಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಕಾರಿಂಜೇಶ್ವರ ಬೆಟ್ಟವನ್ನು ಏರುತ್ತಿದ್ದೇನೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಬೆಟ್ಟ ಹತ್ತಲು ಎಲ್ಲಾ ರೀತಿಯ ಅನುಮತಿ ದೊರೆತಿದೆ. ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಜನತೆ ಸಹಕರಿಸಬೇಕು ಎಂದು ಜ್ಯೋತಿರಾಜ್ ಮನವಿ ಮಾಡಿದ್ದಾರೆ.