Saturday, June 28, 2025

ಪುತ್ತೂರು: ಜಾಗದ ತಕರಾರು – ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ

ಪುತ್ತೂರು: ಕಾಂಗ್ರೆಸ್‌ ಮುಖಂಡರೊಬ್ಬರ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ನಡೆದಿದೆ.

ತಿಂಗಳಾಡಿ ನಿವಾಸಿ, ಸ್ಥಳೀಯ ಕಾಂಗ್ರೆಸ್ ಮುಖಂಡ ರಘುನಾಥ ರೈ ಹಲ್ಲೆಗೆ ಒಳಗಾದವರು. ಹಲ್ಲೆಗೊಳಗಾದವರ ಅಕ್ಕನ ಮಗ ಸುದಿನ್ (ವಿಜಿತ್) ಮತ್ತು ಮತ್ತೋರ್ವ ಯುವಕ ನಿಶಾಂತ್ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ಕಾರ್ಯಕ್ರಮ‌ ಮುಗಿಸಿ ಹಿಂದಿರುಗುವ ವೇಳೆ ಮಳೆ ಬಂದ ಹಿನ್ನಲೆ, ತಿಂಗಳಾಡಿಯ ಅಂಗಡಿಯೊಂದರ ಬಳಿ ರಘುನಾಥ ರೈ ನಿಂತಿದ್ದಾರೆ. ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು ಜಾಗದ ತಕರಾರು ತೆಗೆದು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ರಘುನಾಥ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 126(2),115(2),118(1),109,351(3),352 ಜೊತೆಗೆ 3(5) ಬಿಎನ್ ಎಸ್ 2023. BNS ಯಂತೆ ಪ್ರಕರಣ ದಾಖಲಾಗಿದೆ.‌

Related Articles

Latest Articles