Friday, June 27, 2025

ಕುಂಬಳೆ: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕುಂಬಳೆ: ಹಣ್ಣು ವ್ಯಾಪಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ನಡೆದಿದೆ.‌ ಕುಂಬಳೆ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ-ಹಣ್ಣು ಹಂಪಲು ವ್ಯಾಪಾರಿ ಸಂತೋಷ್ ಮೃತಪಟ್ಟವರು.

ಅಂಗಡಿ ಸಂಕೀರ್ಣದ ಮೇಲಿನ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರುವಾಡು ನಿವಾಸಿ ಕೃಷ್ಣನ್-ಪ್ರೇಮಾವತಿ ದಂಪತಿಯ ಪುತ್ರ ಸಂತೋಷ್ ಯಾನೆ ಸಂತು(40) ಆತ್ಮಹತ್ಯೆಗೆ ಶರಣಾದವರು.

ಮೇ. 6ರ ಮಂಗಳವಾರ ಮಧ್ಯಾಹ್ನ ಅರಿಮಲ ಕಾಂಪ್ಲೆಕ್ಸ್ ಮೇಲೆ ಶೀಟ್ ಹಾಸಿದ ಮಾಡಿನ ಕಬ್ಬಿಣಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು.

ಈ ಕಟ್ಟಡದ ಕೆಳಗೆ ವ್ಯಾಪಾರ ಮಾಡುವವರ ಸಾಮಾಗ್ರಿಗಳನ್ನು ಇಲ್ಲಿ ಇಡಲಾಗುತ್ತದೆ. ಸಾಮಾಗ್ರಿಯನ್ನು ತೆಗೆಯಲು ಹೋದಾಗ ಸಂತೋಷ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು.‌ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Latest Articles