Friday, June 27, 2025

ರಾಜರಾಮ್ ಭಟ್ ಎಡಕ್ಕಾನ ವಿದೇಶದಲ್ಲಿ ಹೃದಯಾಘಾತದಿಂದ ನಿಧನ

ಸುಳ್ಯ: ಉದ್ಯಮಿ ಎಡಕ್ಕಾನ ರಾಜರಾಮ ಭಟ್‌ ಅವರು ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೇ 6ರ‌ ಮುಂಜಾನೆ ನಿಧನರಾಗಿದ್ದಾರೆ.

ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್‌ ಅವರು ಎಡಕ್ಕಾನ ಟ್ರೇಡರ್ಸ್‌ ಎಂಬ ವ್ಯಾಪಾರ ಮಳಿಗೆಯಲ್ಲಿ ಹೊಂದಿದ್ದಾರೆ. ದುಬೈ, ಮಸ್ಕತ್‌ಗಳಲ್ಲಿ ಖರ್ಜೂರದ ವ್ಯಾಪಾರವನ್ನೂ ಹೊಂದಿದ್ದರು.

ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಮುಂಜಾನೆ ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇವರು, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗ ಅವರ ಜೊತೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಚುನಾವಣೆಯ ಬಳಿಕವೂ ಅರುಣ್ ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಎಂಬ ಸಾಮಾಜಿಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದಾಗ, ಅದರ ಜೊತೆಯೂ ಗುರುತಿಸಿಕೊಂಡಿದ್ದರು.

3 ದಿನಗಳ ಹಿಂದೆ ನಡೆದ ಸುಹಾಸ್ ಶೆಟ್ಟಿ ಅವರ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ರಾಜಾರಾಮ್ ಭಟ್ ಅವರು, ಈ ಕುರಿತು ವಿಡಿಯೋವೊಂದನ್ನು ಹರಿಬಿಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು

Related Articles

Latest Articles