ಭಾರತಕ್ಕೆ ಸದ್ಯ ಒಂದು ಜಾಕ್ಪಾಟ್ ಹೊಡೆದಿದೆ. ದೇಶದ ಇದೊಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಅದು ಕೂಡ ಒಂದೇ ಜಾಗದಲ್ಲಿ ಅಲ್ಲ. ಒಟ್ಟು ಏಳು ಕಡೆ ಬಂಗಾರದ ಭಂಡಾರವೇ ಪತ್ತೆಯಾಗಿದೆ.
ಒಡಿಶಾದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೇವಲ ಒಂದು ಕಡೆ ಮಾತ್ರವಲ್ಲದೇ ಒಡಿಶಾದ 7 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಭಾರತದ ಚಿನ್ನದ ಗಣಿಗಾರಿಕೆ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.
ಚಿನ್ನದ ನಿಕ್ಷೇಪದ ಬಗ್ಗೆ ಖುದ್ದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್ ಮಾಹಿತಿ ಹಂಚಿಕೊಂಡಿದ್ದಾರೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಒಟ್ಟು ರಾಜ್ಯ ಏಳು ಕಡೆ ಚಿನ್ನದ ನಿಕ್ಷೇಪವನ್ನ ಪತ್ತೆ ಹಚ್ಚಿದೆ. ಇದು ಒಡಿಶಾವನ್ನ ಭಾರತದ ಅತಿದೊಡ್ಡ ಚಿನ್ನದ ನಿಕ್ಷೇಪವಿರುವ ರಾಜ್ಯವೆಂದು ಗುರುತಿಸಿಕೊಳ್ಳಲಿದೆ ಅಂತ ಹೇಳಿದ್ದಾರೆ.
ಒಡಿಶಾದ ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್, ಬಾದಂಪಹರ್ನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಚಿನ್ನದ ನಿಕ್ಷೇಪಗಳನ್ನ ಪತ್ತೆ ಹಚ್ಚಿದೆ.