
ವಿಟ್ಲ: ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಕಂಪರನಿಯ ಮಾಲೀಕ ಸುಲೈಮಾನ್ ಹಾಜಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಸಂದರ್ಭ ಮನೆಯರಿಂದ ಕಸಿದುಕೊಂಡ ಮೊಬೈಲ್ ಗಳು ಪತ್ತೆಯಾಗಿವೆ.

ಪೊಲೀಸ್ ಅಧಿಕಾರಿಗಳ ತಂಡ ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದೆ.
ದರೋಡೆಕೋರರು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮನೆಯವರಲ್ಲಿದ್ದ 5 ಮೊಬೈಲ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಅವರು ಹಿಂದಿರುಗುವ ಸಂದರ್ಭ ಇದನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರೆಂದು ಹೇಳಲಾಗಿತ್ತು. ಆದರೆ ಮೊಬೈಲ್ ಗಳಿಂದ ಸಿಮ್ ತೆಗೆದು ಮನೆಯ ಮೂರನೇ ಮಹಡಿಯಲ್ಲಿ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಸಿಮ್ ಗಳನ್ನು ತುಂಡರಿಸಿ ಅಲ್ಲೇ ಎಸೆದಿದ್ದಾರೆ ಎಂದು ತಿಳಿದುಬಂದಿದೆ.