ಉಳ್ಳಾಲ : ಇತಿಹಾಸ ಪ್ರಸಿದ್ಧ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ ಮತ್ತು ಶ್ರೀ ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘ (ರಿ.) ಇವುಗಳ ಜಂಟಿ ಮಹಾಸಭೆಯು ಕ್ಷೇತ್ರದ ‘ಮಾಂಗಲ್ಯಂ’ ಸಭಾಂಗಣದಲ್ಲಿ ನಡೆಯಿತು.
ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಉಳ್ಳಾಲ, ಉಚ್ಚಿಲ/ತಲಪಾಡಿ, ನಂದ್ಯಮಣೇಲ್, ಮಂಜನಾಡಿ ಈ ನಾಲ್ಕು ಗ್ರಾಮಗಳ ತೀಯಾ ಸಮಾಜ ಬಾಂಧವರು 800 ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಐದು ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯನ್ನು ಬದಲಾಯಿಸುವ ನಿಯಮದಂತೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಕ್ಷೇತ್ರದ ನೂತನ ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ನಗರ, ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ್ ಉಚ್ಚಿಲ್, ಕೋಶಾಧಿಕಾರಿಯಾಗಿ ಜಗದೀಶ್ ಉಳ್ಳಾಲ್ ನಿಯುಕ್ತರಾದರು.
ನಂತರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ಕು ಗ್ರಾಮಗಳಿಗೆ ಒಬ್ಬರಂತೆ ಮೊಕ್ತೇಸರರಾಗಿ ಸದಾಶಿವ ಉಳ್ಳಾಲ್, ವಿಶ್ವನಾಥ್ ಉಚ್ಚಿಲ್, ರಾಘವ ಕೈಕಂಬ, ಉಮೇಶ್ ಕೊಣಾಜೆ, ಉಪಾಧ್ಯಕ್ಷರಾಗಿ ದಿನೇಶ್ ಕುಂಪಲ, ದಾಮೋದರ್ ತಚ್ಚಾಣಿ, ನಾಗಪ್ಪ ಅಡ್ಯಾರ್, ಜನಾರ್ದನ್ ಕಾಯರ್ಪಳಿಕೆ, ಕಾರ್ಯದರ್ಶಿಗಳಾಗಿ ಕಾಂಚನ್ ಕುಮಾರ್ ಉಳ್ಳಾಲ್, ಸುರೇಶ್ ಬೀರಿ, ಧನಂಜಯ ಬೆಂಜನಪದವು, ಹರೀಶ್ಚಂದ್ರ ಕುತ್ತಾರ್ ಗೌರವ ಸಲಹೆಗಾರರಾಗಿ ನಾಗೇಶ್ ತೊಕ್ಕೊಟ್ಟು, ಪ್ರಕಾಶ್ ಕೆ.ಪಿ. ನಾರ್ಲ, ತಾರಾನಾಥ್ ಕೊಡ್ಮಣ್, ವೆಂಕಪ್ಪ ಮೋರ್ಲ ಆಯ್ಕೆಯಾದರು.

ತೀಯಾ ಯುವ ವೇದಿಕೆಯ ಪ್ರಧಾನ ಸಂಚಾಲಕರಾಗಿ ಕೇಶವ ತೊಕ್ಕೊಟ್ಟು, ತೀಯಾ ಮಹಿಳಾ ವೇದಿಕೆಯ ಪ್ರಧಾನ ಸಂಚಾಲಕಿಯಾಗಿ ಮಾಧವಿ ಉಳ್ಳಾಲ್ ಇವರನ್ನು ಆಯ್ಕೆ ಮಾಡಲಾಯಿತು. ಪ್ರತಿ ಗ್ರಾಮಕ್ಕೆ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಗಳಿಗೆ ಸಂಚಾಲಕರನ್ನು ನೇಮಿಸಲಾಯಿತು. ನಂತರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ಚುನಾವಣಾಧಿಕಾರಿಯಾಗಿ ಸಭೆಯನ್ನು ನಿರ್ವಹಿಸಿದರು. ಸ್ವರ ಮಾಧುರ್ಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು ಗೌರವ ಉಪಸ್ಥಿತರಿದ್ದರು.