ಪಾಲಕ್ಕಾಡ್: ಆರ್ಡರ್ ಮಾಡಿದ ಆಹಾರವನ್ನು ಕಾರಿಗೆ ತಲುಪಿಸದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರನ್ನು ಆರು ಜನರ ತಂಡ ಥಳಿಸಿದ ಘಟನೆ ವರದಿಯಾಗಿದೆ. ಥಳಿಸಿದ್ದಾರೆ ಎಂದು ದೂರು. ನಾಟುಕಲ್ ಮೂಲದ ಯೂಸುಫ್, ಶುಕೂರ್, ಶಿಹಾಬ್, ರಶೀದ್, ಬಾದುಷಾ ಹಾಗೂ ಅವರ ಸ್ನೇಹಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಫೆ ಒಂದರ ಮಾಲೀಕ ಸಾಲ್ಜಾಲಿ ಎಂಬುವವರಿಗೆ ಥಳಿಸಲಾಗಿದೆ. ಮನ್ನಾರ್ಕ್ಕಾಡ್ 53 ತಲುಪಿದ ಆರು ಜನರ ಗುಂಪು ಕೆಫೆಯಿಂದ ಆಹಾರವನ್ನು ಆರ್ಡರ್ ಮಾಡಿದ್ದರು. ಅವರು ಅದನ್ನು ಕಾರಿಗೆ ತಲುಪಿಸಲು ಬಯಸಿದ್ದರು. ಆದರೆ ಕಾರಿನಲ್ಲಿ ಆಹಾರ ವಿತರಿಸದ ಹಿನ್ನೆಲೆಯಲ್ಲಿ ಆರು ಮಂದಿಯ ಗುಂಪು ಸಿಬ್ಬಂದಿ ಹಾಗೂ ಹೋಟೆಲ್ ಮಾಲೀಕರಿಗೆ ಥಳಿಸಿದೆ.
ಹೋಟೆಲ್ ಮಾಲೀಕರ ದೂರಿನ ಪ್ರಕಾರ, ಹೋಟೆಲ್ ಅನ್ನು ಧ್ವಂಸಗೊಳಿಸಲಾಗಿದೆ ಮತ್ತು 50,000 ರೂ.ಗಳಷ್ಟು ಹಾನಿಯಾಗಿದೆ. ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡಿದ್ದಾರೆ.